ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಮೇಲೆ ಮಗಳಿಗೆ ಕಿರುಕುಳ ಆರೋಪ

ಬುಧವಾರ, 1 ಜೂನ್ 2016 (09:24 IST)
ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾಕ್ಟರ್ ಸಿದ್ದರಾಮಯ್ಯನವರ ಮೇಲೆ ಪ್ರೀತಿಸಿ ಮದುವೆಯಾದ ಮಗಳನ್ನು ಆಕೆಯ ಪತಿಯಿಂದ ಬೇರ್ಪಡಿಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ. 
 
ಕಮರ್ಷಿಯಲ್ ಟ್ಯಾಕ್ಸ್ ಜಂಟಿ ಆಯುಕ್ತ ಡಾಕ್ಟರ್ ಸಿದ್ದರಾಮಯ್ಯ ಅವರ ಮಗಳು  ಡ್ರೈವಿಂಗ್ ಶಾಲೆಯಲ್ಲಿ ತರಬೇತಿ ನೀಡುವ ಚಾಲಕನನ್ನು ಪ್ರೀತಿಸಿದ್ದರು. ಅವರಿಬ್ಬರು ಕಳೆದ ಗುರುವಾರ ಮಹದೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
 
ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಯುಕ್ತರು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಿನ್ನೆ ಠಾಣೆಗೆ ಬಂದ ಆಕೆಯ ಪತಿ ವಿಶ್ವ ತಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. 
 
ನಿನ್ನೆ ಯುವತಿಯ ಪೋಷಕರನ್ನು ಸಹ ಠಾಣೆಗೆ ಕರೆ ತರಲಾಯಿತು. ಆದರೆ ಯುವತಿ ಪೋಷಕರ ಜತೆ ಹೋಗಲು ಒಪ್ಪಿಲ್ಲವಾದ್ದರಿಂದ ಆಕೆಯನ್ನು ರಿಮ್ಯಾಂಡ್ ಹೋಮ್‌ಗೆ ಕಳುಗಿಸಲಾಗಿದೆ. 
 
ಮಗಳು ಮಾನಸಿಕ ಅಸ್ವಸ್ಥೆ ಎಂದು ಆಕೆಯ ಪೋಷಕರು ನಿಮಾನ್ಸ್ ಆಸ್ಪತ್ರೆಯಿಂದ ಸರ್ಟಿಫಿಕೇಟ್ ತಂದಿದ್ದರು. ಆದರೆ ಅದು ಸುಳ್ಳು ಪ್ರಮಾಣ ಪತ್ರ. ಪ್ರತಿಷ್ಠೆಯ ಕಾರಣಕ್ಕೆ ನಮ್ಮ ಮದುವೆಯನ್ನವರು ವಿರೋಧಿಸುತ್ತಿದ್ದಾರೆ. ನಾವಿಬ್ಬರು ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಬೇಕೆಂದಿದ್ದೆವು. ಆದರೆ ಅವರು ನನ್ನನ್ನು ಬಿಡುವಂತೆ ಆಕೆಗೆ ದೈಹಿಕ. ಮಾನಸಿಕ ಹಿಂಸೆ ನೀಡಲು ಆರಂಭಿಸಿದಾಗ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಮದುವೆಯಾದೆವು ಎಂದು ಯುವತಿಯ ಪತಿ ವಿಶ್ವ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ