ಯಡಿಯೂರಪ್ಪ ಜೆಡಿಎಸ್ ನ ಶತ್ರು ಅಲ್ಲ ಎಂದ ಹೆಚ್.ಡಿ.ದೇವೇಗೌಡರು

ಬುಧವಾರ, 6 ನವೆಂಬರ್ 2019 (18:20 IST)
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಶತ್ರು ಅಲ್ಲ. ಹೀಗಂತ ಹೇಳೋ ಮೂಲಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮೃಧು ಧೋರಣೆ ತಳೆದಿದ್ದಾರೆ.


ರಾಜಕೀಯ ಅನ್ನೋದೇ ಒಂದು ಆಟ. ಇದರಲ್ಲಿ ಏನೂ ಆಗಬಹುದು ಅಂತ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪರವಾಗಿ ಬ್ಯಾಟಿಂಗ್ ನಡೆಸೋ ಮೂಲಕ ದೇವೇಗೌಡರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.

ರಾಜ್ಯದ ಬಿಜೆಪಿ ಸರಕಾರ ಉರುಳಲು ಬಿಡೋದಿಲ್ಲ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಹೆಚ್.ಡಿ.ದೇವೇಗೌಡರು ನೀಡಿರೋ ಹೇಳಿಕೆ ತೀವ್ರ ರಾಜಕೀಯ ಲೆಕ್ಕಾಚಾರದ ಕುತೂಹಲ ಕೆರಳುವಂತೆ ಮಾಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ