ಆಸ್ಪತ್ರೆಯಲ್ಲೇ ಕುಳಿತು HDK ರಣತಂತ್ರ

ಸೋಮವಾರ, 24 ಏಪ್ರಿಲ್ 2023 (20:50 IST)
ಮಾಜಿ ಸಿಎಂ H.D. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.. ದಳಪತಿ ಆಸ್ಪತ್ರೆಯಲ್ಲೇ ಇದ್ದುಕೊಂಡು ರಣತಂತ್ರ ರೂಪಿಸಿದ್ದಾರೆ.. ಆಸ್ಪತ್ರೆಯಿಂದಲೇ ಚುನಾವಣೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸುತ್ತಿದ್ದು, ಚುನಾವಣಾ ರೂಪುರೇಷ ಸಿದ್ಧಗೊಳಿಸಿದ್ದಾರೆ.. ಈ ಬಾರಿ ಜಾತ್ಯಾತೀತ ಜನತಾ ದಳವನ್ನು ಅಧಿಕಾರಕ್ಕೆ ತರಲು ಕುಮಾರಸ್ವಾಮಿ ಕಸರತ್ತು ನಡೆಸುತ್ತಿದ್ದು, ಗೆಲ್ಲುವ ಅಭ್ಯರ್ಥಿಗಳನ್ನೇ ಗುರುತಿಸಿ ಪ್ರಚಾರಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರಂತೆ. ಅನಾರೋಗ್ಯದ ನಡುವೆಯೂ ಹಠಬಿಡದ ಕುಮಾರಸ್ವಾಮಿ, ಗೆಲ್ಲುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ರೂಟ್‌ ಮ್ಯಾಪ್‌ ರೆಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ