ಚನ್ನರಾಯಪಟ್ಟಣದಲ್ಲಿ ಭಾರೀ ಮಳೆ

ಸೋಮವಾರ, 29 ಆಗಸ್ಟ್ 2022 (16:51 IST)
ಚನ್ನರಾಯಪಟ್ಟಣದಲ್ಲಿ ಭಾರೀ ಮಳೆ ಹಿನ್ನೆಲೆ ಪಾತಪ್ಪನ ದೇವಾಲಯ ಹಾಗೂ ಚಿಕ್ಕಮ್ಮ ದೇವಾಲಯಕ್ಕೆ ಮಳೆ ನೀರು ನುಗ್ಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ದೇವಾಲಯಗಳಿಗೆ ಜಲದಿಗ್ಭಂಧನವಾಗಿದ್ದು. ಕಳೆದ ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಗ್ರಾಮದ ನೂರಾರು ಎಕರೆ ಜಮೀನುಗಳು ಜಲಾವೃತವಾಗಿದೆ. ಗ್ರಾಮದ ಕೆರೆಕಟ್ಟೆಗಳೆಲ್ಲ‌ ತುಂಬಿದ್ದು ಜಮೀನು ಹಾಗೂ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಮಳೆಯಿಂದ ಭಾರಿ ಅನಾಹುತಗಳಾಗುತ್ತಿದ್ದು, ಸೂಕ್ತ ಪರಿಹಾರ ನೀಡುವಂತೆ ಗ್ರಾಮದ ಜನರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ