ಮಳೆಯ ಆಗಮನ ಒಂದೆಡೆ ರೈತರಿಗೆ ಖುಷಿಯನ್ನು ತಂದಿದ್ದರೆ, ಮತ್ತೊಂದೆಡೆ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಮನೆಗಳು ಕುಸಿದುಬಿದ್ದಿದ್ದರೆ, ಮತ್ತೊಂದೆಡೆ ಸೇತುವೆಗಳ ಮೇಲೆ ನೀರು ತುಂಬಿ ಸಂಚಾರ ವ್ಯವಸ್ಥೆಗಳಿಗೆ ತೊಂದರೆಗಳು ಉಂಟಾಗಿದ್ದವು.
ರಾಜ್ಯದ ಹಲವೆಡೆ ನಿನ್ನೆ ಮಧ್ಯಮ ಮಟ್ಟದಲ್ಲಿ ಮಳೆಯಾಗಿದ್ದು, ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಕಡಿಮೆ ಮಟ್ಟದಲ್ಲಿ ಮಳೆಯಾಗಿದೆ. ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ 43 ಮಿ.ಮೀ ಮತ್ತು ಬೀದರ್ ನ ಬಸವಕಲ್ಯಾಣದಲ್ಲಿ 20 ಮಿ.ಮೀ ನಷ್ಟು ಮಳೆಯಾಗಿದೆ. ಇನ್ನು ನಗರದಲ್ಲೂ ಹಲವೆಡೆ ವರುಣನ ಆರ್ಭಟ ಜೋರಾಗಿಯೇ ಇತ್ತು.