ವರದಕ್ಷಿಣೆಗೆ ದುರಾಸೆಗೆ ಹೆಂಡತಿಯನ್ನೇ ಕೊಂದ ಗಂಡ

ಭಾನುವಾರ, 27 ಮಾರ್ಚ್ 2022 (10:06 IST)
ಬೆಂಗಳೂರು: ವರದಕ್ಷಿಣೆಗಾಗಿ ಕೈ ಹಿಡಿದ ಪತ್ನಿಗೆ ಕಿರುಕುಳ ನೀಡುತ್ತಿದ್ದ ಗಂಡ ಆಕೆಯನ್ನು ಕೊಲೆ ಮಾಡಿದ ಕೃತ್ಯ ನಗರದಲ್ಲಿ ನಡೆದಿದೆ.

ಮೂರು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಹಲವು ಬಾರಿ ಗಂಡ ತವರು ಮನೆಯಿಂದ ಹಣ ತಂದುಕೊಡುವಂತೆ ಪೀಡಿಸಿದ್ದ. ಆತನ ಕಿರುಕುಳ ತಾಳಲಾರದೇ ಎರಡು ಬಾರಿ ಮಹಿಳೆ ಹಣ ತಂದುಕೊಟ್ಟಿದ್ದಳು.

ಆದರೆ ಇದೀಗ ಮತ್ತೆ ಎರಡು ಲಕ್ಷ ರೂ. ಹಣಕ್ಕಾಗಿ ಬೇಡಿಕೆಯಿಟ್ಟಿದ್ದ. ಆಕೆ ಒಪ್ಪದೇ ಹೋದಾಗ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ