ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಪಿ.ನಾಗರಾಜು ಸ್ಪಷ್ಟನೆ

ಗುರುವಾರ, 23 ಮಾರ್ಚ್ 2017 (14:01 IST)
ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿಲ್ಲ. ಕೆಲ ಕಾಂಗ್ರೆಸ್ ಮುಖಂಡರು ಉಹಾಪೋಹಗಳನ್ನು ಹರಡಿಸುತ್ತಿದ್ದಾರೆ ಎಂದು ಪಿ.ನಾಗರಾಜು ತಿಳಿಸಿದ್ದಾರೆ
 
ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಮೇಲೆ ಒತ್ತಡ ಹೇರಿ ಮನೆಗೆ ಕರೆಸಿಕೊಂಡು ಕೆಲ ಖಾಲಿ ಪತ್ರಗಳ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಮಾ.25 ರಂದು ನಡೆಯಲಿರುವ ಕೆಎಂಎಫ್ ನಿರ್ದೇಶಕರ ಸಭೆಗೆ ತಡೆ ನೀಡುವಂತೆ ಕೋರಿ ಕೆಎಂಎಫ್ ಅಧ್ಯಕ್ಷ ನಾಗರಾಜು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ರಾಜ್ಯ ಸರಕಾರಕ್ಕೆ ನಿರ್ದೇಶಕರ ಸಭೆ ನಡೆಸದಂತೆ ಸೂಚನೆ ನೀಡಿದೆ.
 
ಒಂದು ವೇಳೆ, ನಿರ್ದೇಶಕರ ಸಭೆ ನಡೆಸಿದಲ್ಲಿ ಸಭೆಯ ತೀರ್ಪು ಕೋರ್ಟ್ ವ್ಯಾಪ್ತಿಗೊಳಪಟ್ಟಿರುತ್ತದೆ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ