ಕಾಂಗ್ರೆಸ್ ನವರ ಮೇಲಿನ ಅಸಮಾಧಾನದಿಂದಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ- ಪ್ರತಾಪ್ ಗೌಡ ಪಾಟೀಲ್

ಬುಧವಾರ, 23 ಅಕ್ಟೋಬರ್ 2019 (11:37 IST)
ಬೆಂಗಳೂರು : ಕಾಂಗ್ರೆಸ್ ನವರ ಮೇಲಿನ ಅಸಮಾಧಾನದಿಂದಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.




ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಪಕ್ಷದವರ ಮೇಲಿನ ಅಸಮಾಧಾನದಿಂದಲೇ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಹೊರತು ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಗಲಿ ಎಂಬ ಕಾರಣಕ್ಕಲ್ಲ. ಎಂದು ಹೇಳಿದ್ದಾರೆ.


ಮತ್ತೆ ಯಾವುದೇ ಕಾರಣಕ್ಕೂ  ಕಾಂಗ್ರೆಸ್ ಗೆ ಹೋಗುವ ಮಾತಿಲ್ಲ. ನ್ಯಾಯಾಲಯದ ತೀರ್ಪು ಬಂದ ನಂತರ ಮುಂದಿನ ಕ್ರಮದ ಬಗ್ಗೆ ಎಲ್ಲರೂ ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ, ಈವರೆಗೆ ಬಿಜೆಪಿ ಸೇರುವ ಯಾವ ನಿರ್ಧಾರವನ್ನು ನಾವು ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ