ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ನಾವು ಪರಸ್ಪರ ಉತ್ತರ-ದಕ್ಷಿಣ ಆಗಿರುವುದು ನಿಜ. ನಮ್ಮ ವಿರುದ್ಧ ಪ್ರವಾಸ ಮಾಡುವುದು ಹಾಗೂ ನಮ್ಮ ವಿರುದ್ಧ ರಾಜಕೀಯ ಹೆಜ್ಜೆ ಇಡುವುದು ಸಹಜ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.