ಭಷ್ಟಚಾರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಜಮೀರ್ ಅಹ್ಮದ್‌

Sampriya

ಮಂಗಳವಾರ, 24 ಜೂನ್ 2025 (14:57 IST)
ಬೆಂಗಳೂರು: ಕರ್ನಾಟಕದ ವಸತಿ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ಮಂಗಳವಾರ ತಳ್ಳಿಹಾಕಿದ್ದಾರೆ.

ಅಂತಹ ಆರೋಪಗಳನ್ನು ಮಾಡುವ ಪಕ್ಷದ ಮುಖಂಡರು ಲಂಚ ಪಡೆಯುವ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲಿ. ಅಂತಹ ಭಷ್ಟಾಚಾರ ಕಂಡುಬಂದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಭಷ್ಟಚಾರದಲ್ಲಿ  ನಾನು ಭಾಗಿಯಾಗಿದ್ದರೆ ಅಥವಾ ಎಲ್ಲಿಯಾದರೂ ನನ್ನ ಹೆಸರು ತನಿಖೆಗೆ ಬಂದರೆ, ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದರು. 

ಜನರಿಗೆ ಮನೆ ಕೊಡಿಸಲು ಲಂಚ ಪಡೆಯುತ್ತಿರುವ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲಿ ಎಂದು ಪಕ್ಷದ ಮುಖಂಡರಾದ ಬಿ.ಆರ್.ಪಾಟೀಲ್ ಮತ್ತು ರಾಜು ಕಾಗೆ ಸವಾಲು ಹಾಕಿದರು. 

ಬಿ.ಆರ್.ಪಾಟೀಲ್ ಅವರು ನನ್ನ ವಿರುದ್ಧ ಆರೋಪ ಮಾಡಿಲ್ಲ, ಆಡಿಯೋ ಸಂಭಾಷಣೆ ಕೇಳಿದ್ದೇನೆ, ಶಾಸಕರು ಮಾಡಿದ ಮನವಿ ಮೇರೆಗೆ ಮನೆ ಮಂಜೂರು ಮಾಡಿದ್ದೇವೆ, ಹಣ ಪಡೆದವರ ಹೆಸರನ್ನು ಬಿ.ಆರ್.ಪಾಟೀಲ್ ಬಹಿರಂಗಪಡಿಸಬೇಕು ಎಂದರು. 

ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದ ಇಲಾಖೆಯಲ್ಲಿ ಪ್ರತ್ಯೇಕ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿದಾಗ, ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಸಿದ್ಧ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ