ಬಿಜೆಪಿ ಟಿಕೆಟ್ ಸಿಗದಿದ್ದರೆ ಹೊಸಕೋಟೆಯಲ್ಲಿ ಬೇರೆ ಚಿಹ್ನೆ ಬರುವುದು- ಶರತ್ ಬಚ್ಚೇಗೌಡ

ಶನಿವಾರ, 2 ನವೆಂಬರ್ 2019 (11:16 IST)
ಹೊಸಕೋಟೆ : ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ಟಿಕೆಟ್ ಸಿಗದಿದ್ದರೆ ಬೇರೆ ಚಿಹ್ನೆ ಬರುವುದಾಗಿ ಹೇಳಿದ್ದಾರೆ.




ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಬೆವರು, ರಕ್ತ ಹರಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಪಕ್ಷ ಕಟ್ಟಿ ಬೆಳೆಸಿದವರಿಗೆ ಇಂದು ಟಿಕೆಟ್ ಸಿಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.


ಈ ಬಾರಿ ನನ್ನ ಪರವಾಗಿ ಕೆಲಸ ಮಾಡಿ. ಮನೆಮನೆಗೆ ಹೋಗಿ ಹೊಸ ಚಿಹ್ನೆಯ ಬಗ್ಗೆ ಪ್ರಚಾರ ಮಾಡಿ. ಎಲೆಕ್ಷನ್ ನಲ್ಲಿ ಬಚ್ಚೇಗೌಡರು ನನ್ನ ಪರ ನಿಲ್ಲಲು ಸಾಧ್ಯವಾಗುವುದಿಲ್ಲ. ನೀವೆ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ