ಅಕ್ರಮ ಬಯಲು.. ಅಧಿಕಾರಿಗಳು ಸಸ್ಪೆಂಡ್!

ಶುಕ್ರವಾರ, 14 ಜುಲೈ 2023 (18:05 IST)
ಕರ್ತವ್ಯ ಲೋಪವೆಸಗಿದ ಹಿನ್ನೆಲೆ ರಾಯಚೂರು ನಗರಸಭೆಯ ಇಬ್ಬರು ಪೌರಾಯುಕ್ತರು ಅಮಾನತಾಗಿದ್ದಾರೆ.ಹಾಲಿ ಪೌರಾಯುಕ್ತ ಗುರಲಿಂಗಪ್ಪ ಹಾಗೂ ಹಿಂದಿನ ಪೌರಾಯುಕ್ತ ರಮೇಶ ನಾಯಕ ಇಬ್ಬರನ್ನು ಸಸ್ಪೆಂಡ್​ ಮಾಡಿ ಪೌರಾಡಳಿತ ಇಲಾಖೆ ನಿರ್ದೇಶಕಿ ಮಂಜುಶ್ರಿ ಆದೇಶಿಸಿದ್ದಾರೆ. ಅಮಾನತಾದ ಅಧಿಕಾರಿಗಳು ಟೆಂಡರ್​ ನಿಯಮದಡಿ ಅಕ್ರಮವೆಸಗಿದ್ದರು, LED ಲೈಟ್ ಅಳವಡಿಕೆಯಲ್ಲಿ 33 ಲಕ್ಷ ಹಣ ದುರ್ಬಳಕೆ ಮಾಡಿದ ಆರೋಪ ಇವರ ಮೇಲಿತ್ತು. ರಾಯಚೂರ ನಗರದ ಮಾಳೇಶ್ವರ ವೃತ್ತದಿಂದ ಗಂಜ್ ಸರ್ಕಲ್​​​ವರೆಗೆ LED ಬಲ್ಬ್ ಅಳವಡಿಕೆಯಲ್ಲಿ ಅಕ್ರಮವೆಸಗಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ತನಖೆಯಲ್ಲಿ ಅಕ್ರಮ ಬಟಾ ಬಯಲಾಗಿತ್ತು.. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್​ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ