ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಫೇಸ್ ಬುಕ್‌ ಖಾತೆ ಹ್ಯಾಕ್: ಹಣಕ್ಕಾಗಿ ಡಿಮ್ಯಾಂಡ್

ಮಂಗಳವಾರ, 7 ಸೆಪ್ಟಂಬರ್ 2021 (21:35 IST)
ಬೆಂಗಳೂರು: ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಫೇಸ್ ಬುಕ್‌ ಖಾತೆ ಹ್ಯಾಕ್ ಮಾಡಿರುವ ಸೈಬರ್ ಖದೀಮರು ಹಣಕ್ಕೆ‌ ಡಿಮ್ಯಾಂಡ್ ಮಾಡಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
 
ಸ್ನೇಹಿತರೇ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಹಣದ ಸಹಾಯ ಕೇಳುತ್ತಿದ್ದೇನೆಂದು ಸುಳ್ಳು ವದಂತಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ‌ಬಂದಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ‌ದೂರವಾದ ಮಾತು ಎಂದು ಟ್ವೀಟ್ ಮೂಲಕ ಸಚಿವ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
 
ದಯವಿಟ್ಟು ಯಾರೊಬ್ಬರೂ ಇಂತಹ ವಂಚನೆಗೆ ಒಳಗಾಗಬೇಡಿ. ಈ ಬಗ್ಗೆ ನಾನು ಸೈಬರ್ ಕ್ರೈಮ್ ಗೆ ದೂರು ನೀಡುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಮಾಹಿತಿ ಎಂದಿದ್ದಾರೆ.
facebook

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ