ಡಿಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಸಹನಾಳನ್ನು ವರಿಸಿ ಇಂದಿಗೆ ಒಂದು ವರ್ಷ

Sampriya

ಶುಕ್ರವಾರ, 28 ಜೂನ್ 2024 (16:11 IST)
ಬೆಂಗಳೂರು: ತನ್ನ ಪಾಡಿಗೆ ಜೀವನ ನಡೆಸದೆ, ಹುಡುಕಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಹತ್ಯೆಗೀಡಾದ ಚಿತ್ರದುರ್ಗಾದ ರೇಣುಕಸ್ವಾಮಿ ಕುಟುಂಬದ ಪರಿಸ್ಥಿತಿ ಯಾರಿಗೂ ಬರಬಾರದು. ವಯಸ್ಸಾದ ತಂದೆ ತಾಯಿ ಒಬ್ಬನೇ ಮಗನ ಆಧಾರದಲ್ಲಿ ಜೀವನ ನಡೆಸುತ್ತಿದ್ದರು. ಇನ್ನೂ ಮದುವೆ ಆಗಿ ವರ್ಷ ಕಳೆಯುವುದರೊಳಗೆ ಗಂಡನನ್ನು ಕಳೆದುಕೊಂಡ ಸಹನಾ ಪರಿಸ್ಥಿತಿ ನೋಡಲಾಗದು.

ತನ್ನ ಪಾಡಿಗೆ ಜೀವನ ನಡೆಸಿಕೊಂಡು, ಪತ್ನಿ ಪೋಷಕರ ಜತೆ ಸಮಯ ಕಳೆಯುತ್ತಿದ್ದರೆ ಇಂದು ರೇಣುಕಾಸ್ವಾಮಿ ತನ್ನ ಪತ್ನಿ ಜತೆಗೆ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದ. ಆದರೆ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸದ ತಪ್ಪಿಗೆ ರೇಣುಕಾಸ್ವಾಮಿ ಹತ್ಯೆಗೀಡಾಗಿದ್ದಾನೆ.

ಇನ್ನೂ ಮಗನನ್ನು ಕಳೆದುಕೊಂಡ ರೇಣುಕಾಸ್ವಾಮಿ ಕುಟುಂಬ ದುಃಖದಲ್ಲಿದೆ. ಇನ್ನೂ 5 ತಿಂಗಳ ಗರ್ಭಿಣಿಯಾಗಿರುವ ಸಹನಾ ಮುಂದಿನ ಜೀವನ ಏನೆಂದು ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನೂ ಎಲ್ಲವು ಸರಿ ಇದ್ದಿದ್ದರೆ ಜೂನ್ 28ರಂದು ರೇಣುಕಾಸ್ವಾಮಿ-ಸಹನಾ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲೂ ಮುಳುಗಿರುತ್ತಿದ್ದರು. ಅದರ ಜತೆಗೆ ಮಗುವಿನ ಆಗಮನದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದರು.

ಆದರೆ ಇದೀಗ ರೇಣುಕಾಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಪೋಷಕರು ತಮಗೆ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಮಂಕಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ