ಶಾಮನೂರು ಶಿವಶಂಕರಪ್ಪ ಪುತ್ರನಿಗೆ ಐಟಿ ದಾಳಿಯ ಶಾಕ್

ಬುಧವಾರ, 27 ಜುಲೈ 2016 (13:12 IST)
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಪುತ್ರನ ನಿವಾಸ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
 
30 ತೆರಿಗೆ ಇಲಾಖೆ ಅಧಿಕಾರಿಗಳು 5 ತಂಡಗಳನ್ನು ಮಾಡಿಕೊಂಡು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಪುತ್ರನ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬೇದಿದೆ.
 
ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್, ಎಸ್‌.ಎಸ್‌.ಗಣೇಶ್, ಎಸ್‌.ಎಸ್‌.ಬಕ್ಕೇಶ್ ಅವರ ಕಚೇರಿ ಹಾಗೂ ಕಾರ್ಖಾನೆ ಸೇರಿದಂತೆ ದಾವಣಗೆರೆಯಲ್ಲಿರುವ ಲಕ್ಷ್ಮೀ ಫ್ಲೊರ್ ಮಿಲ್ ಮತ್ತು ಕಾರ್ಖಾನೆಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ