ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ

ಸೋಮವಾರ, 9 ಜನವರಿ 2023 (08:22 IST)
ಬಳ್ಳಾರಿ : ಗಾಲಿ ಜನಾರ್ದನ ರೆಡ್ಡಿ, ಹೊಸ ಪಕ್ಷ ಕಟ್ಟಿಕೊಂಡು, ಕಲ್ಯಾಣ ಕರ್ನಾಟಕದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸ ಮಾಡ್ತಿದ್ದಾರೆ. ಹೇಗಾದರೂ ಮಾಡಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೆ ತನ್ನದೇ ಸಾಮ್ರಾಜ್ಯ ಸ್ಥಾಪನೆಗೆ ಪ್ಲಾನ್ಗೆ ರೆಡಿಯಾಗುತ್ತಿದ್ದಾರೆ.
 
ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿ ಹೇಳಿದ್ದನ್ನು ಮಾಡಿ ತೋರಿಸುವ ಜಾಯಮಾನದ ರಾಜಕಾರಣಿ. ಕಳೆದ ಡಿಸೆಂಬರ್ 25 ರಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ನೂತನ ಪಕ್ಷವನ್ನು ಸ್ಥಾಪನೆ ಮಾಡಿ, ಕಲ್ಯಾಣ ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ.

ಹೌದು ಕಳೆದ ಹತ್ತು ವರ್ಷಗಳಿಂದ ಬಳ್ಳಾರಿಯಿಂದ ದೂರ ಇದ್ದ ಜನಾರ್ದನ ರೆಡ್ಡಿ, ಈಗ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಒಂದು ಕಡೆ ರೆಡ್ಡಿ ಹೊಸ ಪಕ್ಷ, ಬಿಜೆಪಿಗೆ ದೊಡ್ಡ ಮುಳುವಾಗಿದೆ. ಅದರಲ್ಲಿ ರೆಡ್ಡಿ ಪ್ರಾಬಲ್ಯ ಇರೋ ಬಳ್ಳಾರಿ, ಕೊಪ್ಪಳ ರಾಯಚೂರಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿ ರೆಡ್ಡಿ ಹೊಸ ಪಕ್ಷ ದೊಡ್ಡ ಸವಾಲಾಗಲಿದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ