ಜೆಡಿಎಸ್ನ ಜಮೀರ್ ಅಹ್ಮದ ಹಾಗೂ ಚೆಲುವರಾಯಸ್ವಾಮಿ ಸೇರಿದಂತೆ ಎಂಟು ಬಂಡಾಯ ಶಾಸಕರ ಅಡ್ಡಮತದಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಬಿ.ನಿಂಗಯ್ಯ ಹಾಗೂ ಮಂಜುನಾಥ ಅವರು ನೀಡಿರುವ ದಾಖಲೆಗಳನ್ನು ಪರಿಶೀಲಿಸಿ. ನನಗೆ ಸಮ್ಮತಿ ಎನಿಸಿದರೆ 8 ಶಾಸಕರಿಗೆ ನೋಟಿಸ್ ನೀಡುತ್ತೇನೆ. ಈ ಕುರಿತು ಅಗಸ್ಟ್ 23 ರಂದು ಮತ್ತೆ ವಿಚಾರಣೆ ನಡೆಸುತ್ತೇನೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ್ ತಿಳಿಸಿದರು.