ಉತ್ತರ ಕರ್ನಾಟಕ ಬಂದ್ ಗೆ ಜ್ಯೂನಿಯರ್ ಉಪೇಂದ್ರ ಸಾಥ್

ಬುಧವಾರ, 27 ಡಿಸೆಂಬರ್ 2017 (09:15 IST)
ಹುಬ್ಬಳ್ಳಿ: ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಇಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಜ್ಯೂನಿಯರ್ ಉಪೇಂದ್ರ ಸಾಥ್ ನೀಡಿದ್ದಾರೆ.
 

ನಟ ಉಪೇಂದ್ರರನ್ನೇ ಹೋಲುವ ಜ್ಯೂನಿಯರ್ ಉಪೇಂದ್ರ ಪ್ರತಿಭಟನಾಕಾರರೊಂದಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಭಟನೆ ನಡೆಸಿದರು. ರಿಯಲ್ ಸ್ಟಾರ್ ಉಪೇಂದ್ರ ಶೈಲಿಯಲ್ಲಿ ನೀರು ಕೊಡ್ರಪ್ಪಾ ಎಂದು ಘೋಷಣೆ ಕೂಗಿದರು.

ಮಹದಾಯಿ ನದಿ ನೀರಿಗಾಗಿ ಪ್ರತಿಭಟನೆ ತೀವ್ರ ಸ್ವರೂಪ ತಳೆದಿದ್ದು, ಕೇಂದ್ರ ಸರ್ಕಾರ ಮತ್ತು ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಈ ನಡುವೆ ಪ್ರತಿಭಟನಾಕಾರರ ಆಕ್ರೋಶ ಬಿಜೆಪಿ ನಾಯಕರ ವಿರುದ್ಧವೂ ತಿರುಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ