ವಿಧಾನ ಪರಿಷತ್ನಲ್ಲಿ ನಿಯಮ 68 ರ ಅಡಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರೇ ಖುದ್ದಾಗಿ ನೀಡಿರುವ ಅಕ್ರಮ ಮರಳು ಸಾಗಾಣಿಕೆ ಭಾವಚಿತ್ರವನ್ನು ಪ್ರದರ್ಶನ ಮಾಡಿ ಅಕ್ರಮ ಮರಳು ಸಾಗಾಣಿಕೆ ಕುರಿತು ಆರೋಪಿಸುತ್ತಿದ್ದರು.
ಈ ವೇಳೆ ಮಧ್ಯ ಪ್ರವೇಶ ಮಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅಕ್ರಮ ಮರಳು ಸಾಗಾಣಿಕೆ ಭಾವ ಚಿತ್ರವನ್ನು ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರು ನೀಡಿದ್ದಾ ಅಥವಾ ನೀವೆ ಸೃಷ್ಟಿಸಿದ್ದಾ ಎಂದು ಪ್ರಶ್ನಿಸಿದ್ದಾರೆ. ಇಂಧನ ಸಚಿವರ ಪ್ರಶ್ನೆಕೆ ಉತ್ತರಿಸಿದ ಈಶ್ವರಪ್ಪ, ನನ್ನ ಮನೆದೇವರ ಆಣೆ, ನನ್ನ ತಾಯಿ ಆಣೆಗೂ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರೇ ಭಾವ ಚಿತ್ರವನ್ನು ನೀಡಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಧ್ಯ ವಾಗ್ವಾದ ನಡೆಯಿತ್ತು. ಇದರಿಂದ, ಕೋಪಗೊಂಡ ಕೆ.ಎಸ್.ಈಶ್ವರಪ್ಪ ಕನಕಪುರದಲ್ಲಿ ಮಾಡಿರುವ ಗುಂಡಾಗಿರಿ ಮತ್ತು ದಾದಾಗಿರಿಯನ್ನು ಇಲ್ಲಿ ಮಾಡಬೇಡಿ ಎಂದು ಚಾಟಿ ಬಿಸಿದರು.