ನಿಗದಿತ ಅವಧಿಗೂ ಮೊದಲೇ ಕಬಿನಿ ಭರ್ತಿ: ಬಾಗಿನ ಅರ್ಪಿಸಿದ ಸಿಎಂ

ಗುರುವಾರ, 21 ಸೆಪ್ಟಂಬರ್ 2017 (19:25 IST)
ಮೈಸೂರು: ಈ ಬಾರಿ ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಕಬಿನಿಗೆ ಬಾಗಿನ ಅರ್ಪಿಸಿದರು.

ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಈ ಬಾರಿ ಎರಡು ತಿಂಗಳು ಮೊದಲೇ ಎಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯ ನಿನ್ನೆಯಷ್ಟೇ ಭರ್ತಿಯಾಗಿದೆ. ಈ ಬಾರಿ ಬಹುಬೇಗ ಡ್ಯಾಂ ಭರ್ತಿಯಾಗಿದ್ದು, ಈ ವರ್ಷ ಸಿಎಂ ಸಿದ್ದರಾಮಯ್ಯ ಅರ್ಪಿಸಿದ ಮೊದಲ ಬಾಗಿನವಾಗಿದೆ.

ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಗೆ ಸಂಸದ ಧ್ರುವನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಚಿವೆ ಗೀತಾ ಮಹದೇವ ಪ್ರಸಾದ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ