ಬೆಂಗಳೂರಿನ ದೇವನಹಳ್ಳಿ ಎರ್ಪೊರ್ಟ್ ಗೆ ಆಗಮಿಸಿದ ಇಸ್ರೇಲ್ ನ ಕನ್ನಡಿಗರು

ಶನಿವಾರ, 14 ಅಕ್ಟೋಬರ್ 2023 (18:30 IST)
ಬೆಂಗಳೂರಿನ ದೇವನಹಳ್ಳಿ ಎರ್ಪೊರ್ಟ್ ಗೆ ಇಸ್ರೇಲ್ ನ ಕನ್ನಡಿಗರು ಆಗಮಿಸಿದ್ರು.A.I 506 ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರಿಗೆ  ೯ ಜನ ಕನ್ನಡಿಗರು ಆಗಮಿಸಿದ್ರು.ಮೈಸೂರು ಮೂಲದ ಐದು ಮಂದಿ ಹಾಗೂ ಬೆಂಗಳೂರಿನ ೪ಜನರು ಒಟ್ಟು ಕೆಂಪೇಗೌಡ ಏರ್ಪೋರ್ಟ್ ಗೆ  9ಜನ ಕನ್ನಡಿಗರು ಆಗಮಿಸಿದ್ರು.
 
ಇನ್ನೂ ಇಸ್ರೆಲ್ ನಿಂದ ಬೆಂಗಳೂರಿಗೆ  ಬಂದ  ಸೂರಜ್- ಪುಣ್ಯಕೋಟಿ ದಂಪತಿ ಇಸ್ರೇಲ್ ನ ಉತ್ತರ ಭಾಗದಲ್ಲಿ ಯಾವುದೇ ಯುದ್ಧದ ಭೀತಿ ಇರಲಿಲ್ಲ.ಇಸ್ರೇಲ್ ನ ಗಾಜಾ ಭಾಗದಲ್ಲಿ ಮಾತ್ರ ಯುಧ್ಧ ಭಯವಿತ್ತು.ಅಲ್ಲಿರುವ ನಮ್ಮ ಕೆಲ ಸ್ನೇಹಿತರು ಹೇಳಿದಾಗ ನಮಗೆ  ಶಾಕ್ ಆಗಿತ್ತು.ಒಬ್ಬ ಸ್ನೇಹಿತೆಯನ್ನು ಗಾಜಾಗೆ ಎಳೆದುಕೊಂಡು ಹೋಗಿದ್ದರು.ಅದರಿಂದ‌ ಶಾಕ್‌ ಆಗಿತ್ತು,ಮತ್ತೆ ಎಲ್ಲಾ ಸರಿ ಹೋಗುತ್ತೆ ಎಂಬ ನಂಬಿಕೆ ಇದೆ.ಮತ್ತೆ ವಾಪಸ್ಸು ಹೋಗುತ್ತೇವೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ