ಕರಂದ್ಲಾಜೆ, ಡಿವಿಎಸ್, ಬಿಎಸ್‌ವೈ ಹಿಂದುಗಳನ್ನು ಹತ್ಯೆ ಮಾಡಿಸಿದ್ರು: ಶ್ರೀರಾಮುಲು

ಶುಕ್ರವಾರ, 10 ನವೆಂಬರ್ 2017 (18:26 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಡಿವಿಎಸ್‌ ಹಿಂದುಗಳನ್ನು ಹತ್ಯೆ ಮಾಡಿಸಿದ್ದು ಎಂದು ಸಂಸದ ಶ್ರೀರಾಮುಲು ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ಶ್ರೀರಾಮುಲು, ಯಡವಟ್ಟು ಮಾಡಿಕೊಂಡು ಬಿಎಸ್‌ವೈ ಹಿಂದುಗಳನ್ನು ಹತ್ಯೆ ಮಾಡಿಸಿದ್ದಾರೆ ಎಂದರು.
 
ಕೆಲವೇ ದಿನಗಳ ಹಿಂದೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡುವಂತಹ ಕೆಲಸ ಮಾಡಿದ್ದಾರೆ. ಇದನ್ನು ನೀವೆಲ್ಲರು ನೋಡಿದ್ದೀರಿ ಎನ್ನುವ ಯಡವಟ್ಟು ಭಾಷಣ ಪಕ್ಷದ ಅಭಿಮಾನಿಗಳಿಗೆ ಗೊಂದಲ ಮೂಡಿಸಿತ್ತು. 
 
ಶ್ರೀರಾಮುಲು ಯಾವುದೇ ಮಾತು ಹೇಳಲು ಹೋಗಿ ಮತ್ಯಾವುದೋ ಹೇಳಿಕೆ ನೀಡಿ ಪಕ್ಷದ ನಾಯಕರಲ್ಲಿ, ಕಾರ್ಯಕರ್ತರು ನಕ್ಕು  ನಕ್ಕು ಸುಮ್ಮನಾಗಬೇಕಾಯಿತು ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ