ಚುನಾವಣೆ ಮುಗಿದ ಬೆನ್ನಲ್ಲೇ ಟ್ವಿಟರ್ ಗೂ ವಿಶ್ರಾಂತಿ

ಸೋಮವಾರ, 14 ಮೇ 2018 (10:03 IST)
ಬೆಂಗಳೂರು: ಇಷ್ಟು ದಿನ ಚುನಾವಣೆ ನೆಪದಲ್ಲಿ ರಾಜಕೀಯ ನಾಯಕರ ಟ್ವಿಟರ್ ಸದ್ದು ಮಾಡುತ್ತಲೇ ಇತ್ತು. ಪರಸ್ಪರ ಟೀಕಾಪ್ರಹಾರ ಮಾಡುತ್ತಿದ್ದ ಟ್ವೀಟ್ ಗಳು ನಿನ್ನೆಯ ಮಟ್ಟಿಗೆ ರಜೆ ಪಡೆದಿದ್ದವು!

ಚುನಾವಣೆ ಮುಗಿದ ಬೆನ್ನಲ್ಲೇ ರಾಜಕೀಯ ನಾಯಕರು ರಿಲ್ಯಾಕ್ಸ್ ಆಗಿದ್ದು, ದೋಷಾರೋಪಣೆಗಳನ್ನು ಮಾಡಲು ಬಳಸುವ ಟ್ವಿಟರ್ ಗೂ ವಿಶ್ರಾಂತಿ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿನ್ನೆಯ ದಿನವಿಡೀ ಒಂದೇ ಒಂದು ರಾಜಕೀಯ ಟ್ವೀಟ್ ಮಾಡಿಲ್ಲ. ಅತ್ತ ಸಿಎಂ ಸಿದ್ದರಾಮಯ್ಯ ಕೂಡಾ ಚುನಾವಣೆಗೆ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದು ಬಿಟ್ಟರೆ ಟ್ವೀಟ್ ಮಾಡಲಿಲ್ಲ. ಅಂತೂ ಮತದಾನ ಮುಗಿದ ಬೆನ್ನಲ್ಲೇ ಟ್ವಿಟರ್ ಗೂ ವಿಶ್ರಾಂತಿ ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ