ಕರ್ನಾಟಕದ ಹೆಮ್ಮೆ ಎಸ್.ಎಂ ಕೃಷ್ಣ : ಬೊಮ್ಮಾಯಿ

ಶನಿವಾರ, 28 ಜನವರಿ 2023 (10:25 IST)
ಬೆಂಗಳೂರು : ಪದ್ಮವಿಭೂಷಣ ಗೌರವಕ್ಕೆ ಭಾಜನರಾಗಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಕರ್ನಾಟಕದ ಹೆಮ್ಮೆ ಅಂತ ಸಿಎಂ ಬೊಮ್ಮಾಯಿ ಹೊಗಳಿದ್ದಾರೆ.

ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದ ಎಸ್.ಎಂ. ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದರು. ಕೃಷ್ಣ ಅವರ ನಿವಾಸಕ್ಕೆ ತೆರಳಿ ಹಾರ, ಶಾಲು ಹೊದಿಸಿ ಸನ್ಮಾನಿಸಿದರು. ಸಿಎಂಗೆ ಸಚಿವರಾದ ಅಶ್ವಥ್ ನಾರಾಯಣ , ಅಶೋಕ್, ಗೋಪಾಲಯ್ಯ, ಸುಧಾಕರ್ ಸಾಥ್ ನೀಡಿದ್ರು.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕರ್ನಾಟಕದ ಹೆಮ್ಮೆ ಎಸ್.ಎಂ ಕೃಷ್ಣ ಅವರು, ನಾಡು ಕಂಡ ಸೃಜನಶೀಲ, ಕ್ರಿಯಾಶೀಲ, ಸಜ್ಜನಿಕೆಯ ಉತ್ತಮ ಆಡಳಿತ ಕೊಟ್ಟವರು. ಹತ್ತು ಹಲವಾರು ಜನ ಪರ ಕಾರ್ಯಕ್ರಮ ಕೊಟ್ಟವರು. ಇವತ್ತು ಅವರಿಗೆ ಕೇಂದ್ರ ಪದ್ಮವಿಭೂಷಣ ಕೊಟ್ಟಿದೆ. ಇದು ಸಂತೋಷದ ವಿಷಯ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ