ಮಾಧ್ಯಮಗಳ ವಿರುದ್ಧ ಕೆಂಡಾಮಂಡಲ; ಗೌರವದಿಂದ ಸಾಯುವೆ ಎಂದ ಸ್ಪೀಕರ್

ಮಂಗಳವಾರ, 2 ಜುಲೈ 2019 (19:24 IST)
ಸಾರ್ವಜನಿಕ ಜೀವನದಲ್ಲಿ ನಾನು ಗೌರವದಿಂದ ಸಾಯೋದಿಕ್ಕೆ ಇಷ್ಡಪಡ್ತೀನಿ. ಹೀಗಂತ ಸ್ಪೀಕರ್ ಹೇಳಿದ್ದು, ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳ ವಿರುದ್ಧ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಬದುಕಿಗೆ ಮೂರು ಕಾಸು ಮರ್ಯಾದೆ ಉಳಿದಿಲ್ಲವಾಗಿದೆ. ಈಗಾಗಲೇ ಅಧಃಪತಕ್ಕಿಳಿದಿರುವ ರಾಜಕಾರಣಕ್ಕೆ ನನ್ನನ್ನು ತಳ್ಳಲು ಯಾಕೆ ಪ್ರಯತ್ನ ಮಾಡ್ತೀರಿ? ಅಂತ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಕಚೇರಿಯಲ್ಲಿ ಈಗಾಗಲೇ ಸ್ವೀಕೃತವಾಗಿರುವ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಿಯಮಾನುಸಾರ ಕ್ರಮ ಜರುಗಿಸುವೆ. ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ, ಸಂಪರ್ಕವೂ ಮಾಡಿಲ್ಲ. ನನಗೆ ಯಾರು ಟೈಮ್ ಕೇಳಿಲ್ಲ ಬರೋದು ಗೊತ್ತಿಲ್ಲ ಎಂದ್ರು.

ಸಂವಿಧಾನಕ್ಕೆ ಗೌರವ ಕೊಟ್ಟು ಕೆಲಸ ಮಾಡುತ್ತಿದ್ದೇನೆ ಅಂತ ಸ್ಪೀಕರ್ ರಮೇಶ್ ಕುಮಾರ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ