ಕೇರಳದ ಮಾಜಿ ಮಂತ್ರಿ ಮಗನ ಮದುವೆ ದರ್ಬಾರು ಕೇಳಿದರೆ ಬೆಚ್ಚಿ ಬೀಳುತ್ತೀರಿ

ಭಾನುವಾರ, 4 ಡಿಸೆಂಬರ್ 2016 (09:33 IST)
ತಿರುವನಂತಪುರಂ: ಕೇರಳದ ಮಾಜಿ ಮಂತ್ರಿ ಕಾಂಗ್ರೆಸ್ ನ ಅಡೂರು ಪ್ರಕಾಶನ್ ಪುತ್ರ ಮತ್ತು ಮದ್ಯ ದೊರೆ ಬಿಜು ರಮೇಶ್ ಮಗಳ ಮದುವೆ ವೈಭವ ನೋಡಿದರೆ ಬೆಚ್ಚಿ ಬೀಳುವುದು ಖಂಡಿತಾ. ಇತ್ತೀಚೆಗೆ ಕರ್ನಾಟಕದ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಗಳ ಮದುವೆಯನ್ನೇ ಮೀರಿಸುವ ರೀತಿ ಇದೆ ಕೇರಳದ ಈ ಭಾರೀ ಕುಳಗಳ ಮದುವೆ.

8 ಎಕರೆ ಪ್ರದೇಶದಲ್ಲಿ ದೆಹಲಿಯ ಅಕ್ಷರ ಧಾಮ ಮತ್ತು ಮೈಸೂರಿನ ಅರಮನೆಯ ಸೆಟ್ ಹಾಕಿ ಮಂಟಪ ನಿರ್ಮಿಸಲಾಗಿದೆ. ಈ ಮದುವೆ 20 ಸಾವಿರಕ್ಕೂ ಅಧಿಕ ಅತಿಥಿಗಳು ಆಗಮಿಸಲಿದ್ದಾರೆ ಎಂದು ಪ್ರಕಾಶನ್ ಹೇಳಿದ್ದಾರೆ.

ವಧುವಿನ ತಂದೆ ಬಿಜು ನೂರಾರು ಬಾರ್ ಗಳ ಒಡೆಯ ಮತ್ತು ರಾಜಧಾನಿ ಸಮೂಹ ಸಂಸ್ಥೆಯ ಅಧ್ಯಕ್ಷ. ಕಳೆದ ಯುಡಿಎಫ್ ಸರ್ಕಾರದಲ್ಲಿ ಶಾಸಕರಾಗಿದ್ದಾಗ ಕೆ.ಎಂ. ಮಾಣಿ ಅವರ ಲಂಚ ಹಗರಣವನ್ನು ಬಯಲಿಗೆಳೆದ ವ್ಯಕ್ತಿ. ಅದೇ ಸಂದರ್ಭದಲ್ಲಿ ಪ್ರಕಾಶ್ ಕೂಡಾ ಸಚಿವರಾಗಿದ್ದರು.

ಈ ಅದ್ಧೂರಿ ಮದುವೆ ಈಗ ವಿರೋಧಿಗಳು ಹುಬ್ಬೇರುವಂತೆ ಮಾಡಿದೆ. ನೋಟು ನಿಷೇಧವಾಗಿರುವ ಈ ಕಾಲದಲ್ಲಿ ಇವರಿಗೆ ಇಷ್ಟೊಂದು ಅದ್ಧೂರಿ ಮದುವೆ ಮಾಡಲು ಹಣ ಎಲ್ಲಿಂದ ಬಂತು ಎನ್ನುವುದು ಎಲ್ಲರ ಪ್ರಶ್ನೆ. ಆದರೆ ನನ್ನ ಬಳಿ ಕಪ್ಪು ಹಣವಿಲ್ಲ. ಇದೆಲ್ಲಾ ನ್ಯಾಯಯುತ ಹಣದಿಂದಲೇ ಖರ್ಚು ಮಾಡಿದ್ದೇನೆ ಎಂದು ಬಿಜು ಹೇಳಿಕೊಂಡಿದ್ದಾರೆ. ಆದರೆ ಒಟ್ಟಾರೆ ಎಷ್ಟು ಖರ್ಚು ಮಾಡಿದ್ದೀರಿ ಎಂಬ ಪ್ರಶ್ನೆಗೆ ಬಿಜು ಉತ್ತರಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ