ಸಿಎಂ ಸಿದ್ದರಾಮಯ್ಯಗಾಗಿ ತ್ಯಾಗ ಮಾಡಲು ಹೊರಟಿದ್ದ ಕೆಜೆ ಜಾರ್ಜ್!

ಶನಿವಾರ, 21 ಏಪ್ರಿಲ್ 2018 (10:01 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆಜೆ ಜಾರ್ಜ್ ನಡುವೆ ಎಂತಹಾ ಬಾಂಧವ್ಯವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಇವರಿಬ್ಬರ ನಡುವಿನ ಬಾಂಧವ್ಯ ತ್ಯಾಗದ ಹಂತ ತಲುಪಿದೆಯಂತೆ.

ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮನಸ್ಸು ಮಾಡಿದಾಗ ಸ್ವತಃ ಜಾರ್ಜ್ ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧರಿದ್ದರಂತೆ. 

ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಜನಪರ ಯೋಜನೆಗಳೇ ಅವರನ್ನು ಗೆಲ್ಲಿಸಲಿದೆ ಎನ್ನುವ ವಿಶ್ವಾಸವಿದೆ. ಇಲ್ಲಿ ಆಯ್ಕೆಯಾದರೆ ಇಲ್ಲಿಗೂ ಸಾಕಷ್ಟು ಅಭಿವೃದ್ಧಿಯಾಗಲಿದೆ ಎಂದು ಜಾರ್ಜ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ