ಕುಮಾರಸ್ವಾಮಿ, ಡಿಕೆಶಿಗೆ ರಣರಂಗದಲ್ಲೇ ತೊಡೆತಟ್ಟುತ್ತೇವೆ: ತೇಜಸ್ವಿನಿ ರಮೇಶ್

ಬುಧವಾರ, 22 ಫೆಬ್ರವರಿ 2017 (17:35 IST)
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡ, ಸಚಿವ ಡಿ.ಕೆ.ಶಿವಕುಮಾರ್ ದುರ್ಯೋಧನ ಮತ್ತು ದುಶ್ಯಾಸನರಂತೆ ಎಂದು ಮಾಜಿ ಸಂಸದೆ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ವಾಗ್ದಾಳಿ ನಡೆಸಿದ್ದಾರೆ. 
 
ದುರ್ಯೋಧನ ಮತ್ತು ದುಶ್ಯಾಸನರ ಆರೋಪಗಳಿಗೆ ಪ್ರತ್ಯಾರೋಪ ಮಾಡುವುದಿಲ್ಲ. ಚುನಾವಣೆಯ ರಣರಂಗದಲ್ಲಿ ನಮ್ಮ ತಾಕತ್ತು ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.
 
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ತನ್ನನ್ನು ಕ್ರ್ಯಾಕ್ ಎಂದು ಕರೆದಿದ್ದಾರೆ. ಅದಕ್ಕೆ ನಾನು ಪರ್ವರ್ಟ್ ಎಂದು ಹೇಳಬೇಕಾಗುತ್ತೆ, ಅದನ್ನ ಹೇಳುವುದಕ್ಕೆ ಇಷ್ಟವಿಲ್ಲ. ಜನ ಅದನ್ನ ಅರ್ಥ ಕೂಡಾ ಮಾಡಿಕೊಳ್ಳಲ್ಲ. ಮಾಜಿ ಸಿಎಂ ಎಂಬ ಅಹಂಕಾರ ಬಿಟ್ಟು ಸರಳ ಸಜ್ಜನ ರಾಜಕಾರಣಿಯಂತೆ ಇರಲಿ. ಅವರ ಮಾತುಗಳೇ ಅವರ ಸಂಸ್ಕ್ರತಿಯನ್ನ ತೋರಿಸುತ್ತೆ ಅಂದ್ರು.
 
ಕುಮಾರಸ್ವಾಮಿ ಮತ್ತು ಡಿಕೆಶಿವಕುಮಾರ್ ಇಬ್ಬರು ಹೊಂದಾಣಿಕೆಯ ರಾಜಕಾರಣ ಮಾಡುತ್ತಿರುವುದರಿಂದ ಅವರನ್ನು ಕೌರವರು ಎಂದು ಟೀಕಿಸಿದ್ದೇನೆ ಎಂದು ಮಾಜಿ ಸಂಸದೆ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ