ನಂಬಿದ್ರೆ ಬಿಟ್ರೆ ಬಿಡಿ: ಸಚಿವ ಡಿಕೆಶಿ, ಕುಮಾರಸ್ವಾಮಿ ಹಸ್ತ ಲಾಘವ

ಶನಿವಾರ, 22 ಜುಲೈ 2017 (16:15 IST)
ಪರಸ್ಪರ ಸಾಂಪ್ರದಾಯಿಕ ಬದ್ಧ ವೈರಿಗಳಾದ ಇಂಧನ ಖಾತೆ ಸಚಿವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಇಂದು ಭೇಟಿಯಾಗಿ ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿರುವುದು ಅಚ್ಚರಿ ಮೂಡಿಸಿದೆ.
 
ಮೈಸೂರು ಜಿಲ್ಲೆಯ ಹುಣಸನ ಹಳ್ಳಿಯಲ್ಲಿ ನಿಧನ ಹೊಂದಿರುವ ಎಚ್,ನಂಜಪ್ಪ ಅವರ ಅಂತ್ಯಸಂಸ್ಕಾರಕ್ಕಾಗಿ ಇಬ್ಬರು ನಾಯಕರು ಮುಖಾಮುಖಿ ಬೇಟಿಯಾಗಿ ಐದು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
 
ಇಂದು ನಿಧನವಾಗಿದ್ದ ನಂಜಪ್ಪ ಜೆಡಿಎಸ್ ಮುಖಂಡರಾಗಿದ್ದರಿಂದ ಕುಮಾರಸ್ವಾಮಿ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. ಅದರಂತೆ, ಹಿರಿಯ ಕಾಂಗ್ರೆಸ್ ಮುಖಂಡ, ಇಂಧನ ಖಾತೆ ಸಚಿವ ಕೂಡಾ ನಂಜಪ್ಪ ತಮ್ಮ ಆಪ್ತರಾಗಿದ್ದರಿಂದ ಆಗಮಿಸಬೇಕಾಯಿತು ಎಂದು ತಿಳಿಸಿದ್ದಾರೆ.
 
ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ನಂಜಪ್ಪ ಕೂಡಾ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ತುಂಬಾ ಪ್ರಾಮಾಣಿಕ ವ್ಯಕ್ತಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೊಗಳಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ