ಮಹದೇವಪುರದಲ್ಲಿ ಕುಮಾರಸ್ವಾಮಿ ರೋಡ್ ಶೋ

ಮಂಗಳವಾರ, 8 ಮೇ 2018 (15:58 IST)
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಹದೇವಪುರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರ ಅಬ್ಬರದ ರೋಡ್ ಶೋ ನಡೆಸಿದ್ರು. 
 ಮೈಸೂರಿನಿಂದ ನೇರವಾಗಿ ಶ್ರೀರಂಗಪಟ್ಟಣದ ಮಹದೇವಪುರಕ್ಕೆ ಆಗಮಿಸಿದ ಹೆಚ್‌ಡಿಕೆಗೆ ಗ್ರಾಮದ ಮಹಿಳೆಯರು ಅರಿಶಿನ ನೀರು, ಬೆಲ್ಲದ ಆರತಿ ಮಾಡಿ ಸ್ವಾಗತಿಸಿದ್ರು. ಬಳಿಕ ನಗಾರಿ, ತಮಟೆ ಸಾಂಸ್ಕೃತಿಕ ಕಲಾ ತಂಡಗಳು ಹೆಚ್ಡಿಕೆಗೆ ಸ್ವಾಗತ ಕೋರಿದ್ವು. ವಿಕಾಸಯಾತ್ರೆಯಲ್ಲಿ ಹೆಚ್ಡಿಕೆಗೆ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಸಾಥ್ ಕೊಟ್ರು. 
 
ಇನ್ನು ರೋಡ್ ಷೋ ನಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ರು. ಈ ಸಂದರ್ಭದಲ್ಲಿ ಕಾರ್ಯಕರ್ತರು ವಿಕಾಸ ವಾಹಿನಿಗೆ ಅಡ್ಡಲಾಗಿ ಬಂದಿದ್ದರಿಂದ ಸಿಡಿಮಿಡಿಗೊಂಡ ಹೆಚ್ಡಿಕೆ, ಕಾರ್ಯಕರ್ತರು ವಿಕಾಸವಾಹಿನಿಗೆ ದಾರಿ ಮಾಡಿಕೊಡಿದ್ದಲ್ಲಿ ಪ್ರಚಾರ ನಡೆಸದೇ ವಾಪಸ್ ಹೋಗುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ರು. ಎಚ್ಡಿಕೆ ಶ್ರೀರಂಗಪಟ್ಟಣ ಸೇರಿ ಸುಮಾರು ಎಂಟತ್ತು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ