ರಾಜಕಾಲುವೆ ಒತ್ತುವರಿ: ಶಾಮನೂರ್ ಒಡೆತನದ ಆಸ್ಪತ್ರೆ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ

ಗುರುವಾರ, 20 ಅಕ್ಟೋಬರ್ 2016 (18:10 IST)
ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮಾಜಿ ಸಚಿವ ಶಾಮನೂರ್ ಶಿವಶಂಕರಪ್ಪ ಒಡೆತನದ ಎಸ್‌.ಎಸ್.ಆಸ್ಪತ್ರೆ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 
 
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬ ವರ್ಗಕ್ಕೆ ಸೇರಿರುವ ಎಸ್.ಎಸ್.ಆಸ್ಪತ್ರೆಯನ್ನು ವಶಕ್ಕೆ ಹಾಗೂ ತೆರವುಗೊಳಿಸದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
 
ಕಂದಾಯ ಇಲಾಖೆಯ ಸೂಪರ್ ಇಂಪೂಸ್ ಮ್ಯಾಪ್‌ ದಾಖಲಾತಿಯ ಪ್ರಕಾರ, ಕೆರೆ ಒತ್ತುವರಿಯಾದ ಜಾಗದಲ್ಲಿ ಸರ್ವೆ ನಂಬರ್ 52 ರಲ್ಲಿ ಶಾಮನೂರು ಶಿವಶಂಕರಪ್ಪ ಒಡೆತನದಲ್ಲಿ ಎಸ್‌.ಎಸ್‌.ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಆಸ್ಪತ್ರೆ ತೆರವುಗೊಳಿಸಲು ಬಿಬಿಎಂಪಿ ಸಕಲ ಸಿದ್ಧತೆ ನಡೆಸುತ್ತಿತ್ತು. 
 
ಆಸ್ಪತ್ರೆಯನ್ನು ತೆರವುಗೊಳಿಸದಂತೆ ಮಾಚಿ ಸಚಿವ ಶಾಮನೂರು ಶಿವಶಂಕರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ