ಗಲಭೆಗೆ ಕಾರಣವಾಯ್ತಾ ಲೇಸರ್​​ ಲೈಟ್.​.?

ಗುರುವಾರ, 21 ಏಪ್ರಿಲ್ 2022 (18:42 IST)
ಹಳೇ ಹುಬ್ಬಳ್ಳಿ ಗಲಾಟೆ ಕೇಸ್​ನಲ್ಲಿ ದಿನಕ್ಕೊಂದು ರಹಸ್ಯ ಬಯಲಾಗುತ್ತಿದ್ದು, ಇದೀಗ ಲೇಸರ್​ ಲೈಟ್​ನಿಂದ ಹುಬ್ಬಳ್ಳಿ ಹೊತ್ತಿ ಉರಿದಿತ್ತು, ಮಸೀದಿ ಮೇಲೆ ಜೈ ಶ್ರೀರಾಮ ಎಂದು ಲೇಸರ್​​​​​ ಲೈಟ್ ಹಾಕಿದ್ದಕ್ಕೆ ಗಲಭೆಗೆ ಕಾರಣವಾಯ್ತು ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ 3 ತಿಂಗಳಿಂದ ಒಂದು ಗುಂಪಿನ ವಿರುದ್ಧ ಕ್ಯಾಂಪೇನ್​ ಮಾಡಲಾಗುತ್ತಿತ್ತು. ರಾಮನವಮಿ ದಿನ ದೊಡ್ಡ ಗಲಾಟೆಯೇ ನಡೆಯಬೇಕಿತ್ತು. ಹುಬ್ಬಳ್ಳಿ ಪೆಂಡಾರ್ ಗಲ್ಲಿ ಮಸೀದಿ ಮೇಲೆ ಲೇಸರ್​ ಲೈಟ್​ ಹರಿದಾಡಿತ್ತು. ಜೈ ಶ್ರೀರಾಮ ಎಂದು ಲೇಸರ್​​​​​ ಲೈಟ್ ಹಾಕಿ ಮೆರವಣಿಗೆ ಮಾಡಲಾಗಿತ್ತು. ಮಸೀದಿ ಮೇಲೆ ಲೇಸರ್​ ಬಿಡದಂತೆ ಕೆಲ ಯುವಕರು ತಡೆದಿದ್ದರು. ಇದಾದ ಬೆನ್ನಲ್ಲೇ ವಿವಾದಿತ ಪೋಸ್ಟ್​ ಹರಿದಾಡಿತ್ತು. ವಸೀಂ ಪಠಾಣ್, ಇರ್ಫಾನ್, ಮಹ್ಮದ್ ಆರಿಫ್​ರಿಂದ ಹೋರಾಟಕ್ಕೆ ಕರೆ ಕೊಟ್ಟಿದ್ದು, ಹುಬ್ಬಳ್ಳಿ ಕಿಂಗ್ಸ್ ಅನ್ನೋ ವಾಟ್ಸಾಪ್​​ ಗ್ರೂಪ್​​ನಲ್ಲಿ ವಸೀಂ ಪಠಾಣ್​​ ಕರೆ ನೀಡಿದ್ದ. ತನ್ನ ವಾರ್ಡ್​ನ ಎಲ್ಲಾ ಜನರನ್ನು AIMIMನ ಇರ್ಫಾನ್ ಕರೆತಂದಿದ್ದ. ಯುವಕನ ಬಚಾವ್​ ಮಾಡಲು ಪೊಲೀಸರು ಅಲರ್ಟ್ ಆಗಿದ್ದರು ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ