ವಕೀಲರ ಸಂಘದ ಚುನಾವಣೆ ರೋಡ್ ಬಂದ್ ಸಾಧ್ಯತೆ

ಶನಿವಾರ, 18 ಡಿಸೆಂಬರ್ 2021 (15:42 IST)
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ದಿನಾಂಕ 19-12-2021ರಂದು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರ ಸಂಘದ ಚುನಾವಣೆ ಹಾಗೂ ಫಲಿತಾಂಶ ಪ್ರಯುಕ್ತ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಸಾರ್ವಜನಿಕರ ವಾಹನಗಳ ನಿಷೇಧಿಸಲಾಗಿರೋದಾಗಿ ತಿಳಿಸಿದ್ದಾರೆ.ಅಂಚೆ ಕಛೇರಿ ರಸ್ತೆ ( ಸಿಟಿ ಸಿವಿಲ್ ಕೋರ್ಟ್ ಮುಂಭಾಗದ ರಸ್ತೆ )ಯನ್ನು ನಾಳೆ ಮುಚ್ಚಿರುವ ಕಾರಣದಿಂದಾಗಿ, ವಾಹನ ಸವಾರರರು ಶೇಷಾದ್ರಿ ರಸ್ತೆಯಿಂದ ಮೈಸೂರು ಬ್ಯಾಂಕ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಕೆ ಆರ್ ಸರ್ಕಲ್ ನಿಂದ ನೃಪತುಂಗ ರಸ್ತೆ ಮಾರ್ಗವಾಗಿ ಸಾಗಿ, ಪೊಲೀಸ್ ಕಾರ್ನರ್ ನಲ್ಲಿ ಬಲ ತಿರುವು ಪಡೆದುಕೊಂಡು, ಕೆಜಿ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ಸರ್ಕಲ್ ತಲುಪುವಂತೆ ಮನವಿ ಮಾಡಿದೆ.
 
ಇನ್ನು ಮೈಸೂರು ಬ್ಯಾಂಕ್ ಕಡೆಯಿಂದ ಕೆ ಆರ್ ಸರ್ಕಲ್ ಕಡೆಗೆ ಸಾಗುವ ವಾಹನ ಸವಾರರು, ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ಯಾಲೇಸ್ ರಸ್ತೆಗೆ ಬಲ ತಿರುವು ಪಡೆದುಕೊಂಡು, ಮಹಾರಾಣಿ ಕಾಲೇಜ್ ಮೇಲ್ ಸೇತುವೆ ಮೇಲೆ ಎಡತಿರುವು ಪಡೆದುಕೊಂಡು, ಫ್ರೀಡಂ ಪಾರ್ಕ್ ಜಂಕ್ಷನ್ ನಲ್ಲಿ ಯು ಟರ್ನ್ ಪಡೆದು ಶೇಷಾದ್ರಿ ರಸ್ತೆ ಮೂಲಕ ಕೆ ಆರ್ ಸರ್ಕರ್ ತಲುಪುವಂತೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ