ಬಿಜೆಪಿ ನಾಯಕರಿಂದ ಕೀಳುಮಟ್ಟದ ರಾಜಕಾರಣ ನಡೆಸಲಾಗುತ್ತಿದೆ – ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬುಧವಾರ, 3 ಏಪ್ರಿಲ್ 2019 (15:02 IST)
ಹಾಸನ : ಬಿಜೆಪಿ ನಾಯಕರಿಂದ ಕೀಳುಮಟ್ಟದ ರಾಜಕಾರಣ ನಡೆಸಲಾಗುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮಗೆ ಹೆಲಿಕಾಪ್ಟರ್ ಸಿಗದಂತೆ ಮಾಡಿದೆ. ನಾವು ಹೆಚ್ಚು ಜನರ ಬಳಿ ಹೋಗದಂತೆ ತಡೆಯಲು ಯತ್ನ ನಡೆಸಲಾಗಿದೆ. ಬಿಜೆಪಿ ನಾಯಕರಿಂದ ಕೀಳುಮಟ್ಟದ ರಾಜಕಾರಣ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.

 

ಅಲ್ಲದೇ ಪ್ರಧಾನಿ ಮೋದಿಗೂ ಇದು ಸುಲಭದ ಚುನಾವಣೆಯಲ್ಲ. 2014 ಕ್ಕೂ, 2019ಕ್ಕೂ ಸಾಕಷ್ಟು ಬದಲಾವಣೆಗಳು ಆಗಿವೆ. ರೈತರು ಕೇಂದ್ರದಲ್ಲಿ ಬಿಜೆಪಿ ಸರ್ಕಾರದಿಂದ ನೊಂದಿದ್ದಾರೆ. ನಮ್ಮದು ಕಿಚಿಡಿ ಪಾರ್ಟಿ ಅಂತಾರೆ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ