ಅಪರೇಷನ್ ಕಮಲ ತನಿಖೆ ಮಾಡುವುದಕ್ಕೆ ಸಿಬಿಐಗೆ ನೀಡಲಿ- ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

ಸೋಮವಾರ, 19 ಆಗಸ್ಟ್ 2019 (12:00 IST)
ಹುಬ್ಬಳ್ಳಿ : ಫೋನ್ ಕದ್ದಾಲಿಕೆ ಕೇಸ್ ನ ತನಿಖೆ ಸಿಬಿಐಗೆ ವಹಿಸಿರುವ ಹಿಂದೆ ತನ್ನ ಸಲಹೆ ಇದೆ ಎಂದ ಸಿಎಂ ಯಡಿಯೂರಪಪ್ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಫೋನ್ ಕದ್ದಾಲಿಕೆ ಕೇಸ್ ನ ತನಿಖೆ ನನ್ನ ಸಲಹೆಯಂತೆ ಸಿಬಿಐಗೆ ನೀಡಿದ್ದೇನೆಂದು ಸಿಎಂ ಹೇಳಿದ್ದಾರೆ. ಅದು ನೂರಕ್ಕೆ ಸೂರರಷ್ಟು ಸುಳ್ಳು. ಸಿಎಂ ನನ್ನ ಸಲಹೆ ಕೇಳುವುದಾದ್ರೆ ಅಪರೇಷನ್ ಕಮಲ ತನಿಖೆ ಮಾಡುವುದಕ್ಕೆ ಸಿಬಿಐಗೆ ನೀಡಲಿ. ಅಪರೇಷನ್ ಕಮಲದಲ್ಲೂ ಕೋಟ್ಯಾಂತರ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

 

ಹಾಗೇ ಸಚಿವ ಸಂಪುಟ ರಚಿಸುವ ಅಧಿಕಾರ ಸಿಎಂ ಯಡಿಯೂರಪ್ಪ ನವರಿಗೆ ಇದೆ. ಆದರೆ ಅವರು ಅಮಿತ್ ಶಾ ಮುಲಾಜಿನಲ್ಲಿದ್ದಾರೆ. ಹೀಗಾಗಿ ಬಿಜೆಪಿಯಲ್ಲೂ ಕೇಂದ್ರಿಕೃತ ಅಧಿಕಾರವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ