ಸ್ವತಂತ್ರ ಧರ್ಮ: ಬಿಎಸ್‌ವೈ ವಿರುದ್ಧ ಲಿಂಗಾಯುತ ಶಾಸಕರ ಅಸಮಾಧಾನ ಸ್ಫೋಟ

ಮಂಗಳವಾರ, 25 ಜುಲೈ 2017 (17:31 IST)
ಸ್ವತಂತ್ರ ಲಿಂಗಾಯುತ ಧರ್ಮ ಕುರಿತಂತೆ ನಿಲುವು ಸ್ಪಷ್ಟಪಡಿಸುವುದು ಅಗತ್ಯವಾಗಿದೆ ಎಂದು ಬಿಜೆಪಿಯಲ್ಲಿರುವ ಲಿಂಗಾಯುತ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ. 
 
ಏಕಾಂಗಿಯಾಗಿ ಯಾವುದೇ ನಿರ್ಧಾರ ಪ್ರಕಟಿಸಬೇಡಿ. ಲಿಂಗಾಯುತ ಶಾಸಕರು, ಸಂಸದರೊಂದಿಗೆ ಚರ್ಚೆ ನಡೆಸಿದ ನಂತರ ನಿಲುವು ಬಹಿರಂಗಪಡಿಸುವುದು ಸೂಕ್ತ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
 
ಒಂದು ವೇಳೆ, ಸ್ವತಂತ್ರ ಧರ್ಮ ಕುರಿತು ನಿಲುವು ಪ್ರಕಟಿಸದಿದ್ದಲ್ಲಿ ಉತ್ತರ ಕರ್ನಾಟಕದ ಲಿಂಗಾಯುತ ಸಮುದಾಯ ಪಕ್ಷದ ವಿರುದ್ಧವಾದಲ್ಲಿ ಭಾರಿ ಸೋಲು ಅನುಭವಿಸಬೇಕಾಗುತ್ತದೆ ಎನ್ನುವ ಆತಂಕವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.  
 
ಸಿಎಂ ಸಿದ್ದರಾಮಯ್ಯ ಲಿಂಗಾಯುತ ಕಾರ್ಡ್ ಪ್ಲೇ ಮಾಡಿರುವುದು ಬಿಜೆಪಿಯ ಜಂಘಾಬಲವೇ ಉಡುಗಿಸಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ