ಸಜೀವ ಗುಂಡುಸಿಡಿದು ಮಹಿಳೆಯ ಕೈಬೆರಳು ತುಂಡು

ಭಾನುವಾರ, 8 ಮೇ 2016 (11:50 IST)
ದಾವಣಗೆರೆ ತಾಲೂಕು ಹುಣಸೆಕಟ್ಟೆ ಗ್ರಾಮದಲ್ಲಿ ಪೊಲೀಸ್ ಫೈರಿಂಗ್ ತರಬೇತಿ ಕೇಂದ್ರದ ಪಕ್ಕದಲ್ಲೇ  ಬಿದ್ದಿದ್ದ ಮದ್ದುಗುಂಡುಗಳನ್ನು  ಜಜ್ಜಿ ತುಂಡುಮಾಡಲು ಯತ್ನಿಸಿದಾಗ ಆ ಗುಂಡು ಸಿಡಿದು ರತ್ನಮ್ಮ ಎಂಬ ಮಹಿಳೆಯ ಕೈಗೆ ಗಾಯವಾಗಿದೆ.

 ಜಮೀನಿನಲ್ಲಿ ಕೆಲಸ ಮಾಡುವಾಗ ಈ ಸಜೀವ ಗುಂಡು ಮಹಿಳೆಗೆ ಸಿಕ್ಕಿತ್ತು. ಸ್ಫೋಟದ ತೀವ್ರತೆಯಿಂದ ಆರೇಳು ಬೆರಳುಗಳು ತುಂಡಾಗಿವೆಯೆಂದು ಹೇಳಲಾಗುತ್ತಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತರಬೇತಿ ಕೇಂದ್ರದಲ್ಲಿ ಸಜೀವ ಗುಂಡನ್ನು ಎಸೆದಿರುವ ನಿರ್ಲಕ್ಷ್ಯ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ