ಲಾಕ್ ಡೌನ್ ಜಾರಿ : ಬಸ್ ಗಳಿಗೆ ನೋ ಪ್ರಾಬ್ಲಮ್

ಸೋಮವಾರ, 13 ಜುಲೈ 2020 (21:53 IST)
ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಹೀಗಾಗಿ ಬಸ್ ಗಳಲ್ಲಿ ಸಂಚಾರ ಮಾಡೋರಿಗೆ ಅಗತ್ಯವಿದ್ದಷ್ಟು ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಪ್ರತಿದಿನ 800 ಹೆಚ್ಚುವರಿ ಬಸ್ ಗಳನ್ನು ಎಂದರೆ ಒಟ್ಟು 1600 ಬಸ್ ಗಳು ಕೆಎಸ್ ಆರ್ ಟಿಸಿ ಯಿಂದ ಓಡಾಟ ನಡೆಸುತ್ತಿವೆ.

ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿ 200 ಬಸ್ ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಸವದಿ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ