ಲೋಕಾಯುಕ್ತ ಇಲಾಖೆ ಬಲಿಷ್ಠಗೊಳಿಸಿ: ಎಸ್‌.ಆರ್.ಹಿರೇಮಠ್ ಒತ್ತಾಯ

ಮಂಗಳವಾರ, 29 ಮೇ 2018 (18:33 IST)
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೂಡಲೇ ಲೋಕಾಯುಕ್ತ ಇಲಾಖೆಯನ್ನು ಬಲಿಷ್ಠಗೊಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಇಲಾಖೆಯನ್ನು ದುರ್ಬಲಗೊಳಿಸಿ ಎಸಿಬಿ ಜಾರಿಗೆ ತರುವ ಮೂಲಕ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳುವ ದುರುದ್ದೇಶದಿಂದ ಈ ಇಲಾಖೆಯ ನಿಷ್ಕ್ರಿಯತೆಗೆ ಮುಂದಾಗಿತ್ತು. ಆದ್ದರಿಂದ ಕೂಡಲೇ ಲೋಕಾಯುಕ್ತ ಇಲಾಖೆಗೆ ಮೊದಲಿನ ಅಧಿಕಾರ ನೀಡಿ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
 
ಆದ್ದರಿಂದ ಕೂಡಲೇ ನೂತನ ಸಿಎಂ ಕುಮಾರಸ್ವಾಮಿ ಮತ್ತು ಅವರ ಸರ್ಕಾರ ಎಸಿಬಿ ಬಗ್ಗೆ ಯಾವ ನಿಲುವು ಹೊಂದಲಾಗಿದೆ ಎಂದು ಬಹಿರಂಗ ಪಡಿಸಲು ಅಪಡೆವೆಟ್ ಹಾಕಬೇಕು ಎಂದು ಅವರು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ