ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ

ಗುರುವಾರ, 20 ಅಕ್ಟೋಬರ್ 2016 (10:12 IST)
ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಸಾವಿಗೆ ಶರಣಾದ ಘಟನೆ ಮಹದೇವಪುರ ಬಳಿಯ ಕಾವೇರಿ ನಗರದಲ್ಲಿ ನಡೆದಿದೆ. 
ಮೃತಳನ್ನು ಕಾವೇರಿ ನಗರದ ನಿವಾಸಿ ರೇಖಾ ಮತ್ತು ಕಾಡುಗೋಡಿ ನಿವಾಸಿಯಾಗಿರುವ ಆಕೆಯ ಪ್ರಿಯತಮ ಎಂದು ಗುರುತಿಸಲಾಗಿದೆ.
 
ರೇಖಾ ಪ್ರೀತಿಯನ್ನು ವಿರೋಧಿಸಿದ್ದ ಆಕೆಯ ಮನೆಯವರು ಬೇರೆ ಹುಡುಗನ ಜತೆ ಮದುವೆ ನಿಶ್ಚಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಬ್ಬರು ನಿನ್ನೆ ರಾತ್ರಿಯೇ ಮನೆ ಬಿಟ್ಟು ಬಂದಿದ್ದರು. ಇಂದು ಮುಂಜಾನೆ ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟು ದುರ್ಮರವನ್ನಪ್ಪಿದ್ದಾರೆ. 
 
ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ