ಒಂದೇ ದಿನದಲ್ಲಿ 10 ಜನರಿಗೆ ಕಡಿದ ಹುಚ್ಚುನಾಯಿ!

ಸೋಮವಾರ, 12 ಡಿಸೆಂಬರ್ 2022 (10:40 IST)
ಕೊಪ್ಪಳ : ಹುಚ್ಚುನಾಯಿ ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಕಡಿದಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.

ಸುಜಾತ ಮಲ್ಲಾಪೂರ (4), ಶಿವಕುಮಾರ ಮಲ್ಲಾಪೂರ (11), ಶಿವಕುಮಾರ ಕಡಿವಾಲ (15), ಗಿರಿಯಪ್ಪ ನೆಲ್ಲೂರು (62), ಶರಣಪ್ಪ ಮಲ್ಲಾಪೂರ (54) ಸೇರಿದಂತೆ ಇನ್ನೂ 5 ಜನರಿಗೆ ಹುಚ್ಚುನಾಯಿ ಕಡಿದಿದೆ. 

ಗಾಯಗೊಂಡ ಸುಜಾತ ಮಲ್ಲಾಪೂರ ಹಾಗೂ ಶಿವಕುಮಾರ ಮಲ್ಲಾಪೂರ ಎಂಬವರು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರರಿಗೆ ಹನುಮನಾಳ ಆಸ್ಪತ್ರೆ ಹಾಗೂ ಇನ್ನೂ ಕೆಲವರಿಗೆ ಬಾದಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಉಪಟಳ ತಪ್ಪಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ