ಬಿಜೆಪಿಯಿಂದ ಮಲ್ಲಮ್ಮಗೆ ಕಿರುಕುಳ– ಸಿಎಂ

ಬುಧವಾರ, 20 ಡಿಸೆಂಬರ್ 2017 (15:43 IST)
ಯೋಗೀಶಗೌಡ ಪತ್ನಿ ಮಲ್ಲಮ್ಮ ಅವರಿಗೆ ಬಿಜೆಪಿ ಪಕ್ಷದವರು ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಮಲ್ಲಮ್ಮ ತಮ್ಮನ್ನು ಭೇಟಿ ಮಾಡಿ ಭದ್ರತೆ ಕಲ್ಪಿಸಲು ಕೇಳಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಹ್ಲಾದ್ ಜೋಷಿ, ಜಗದೀಶ್‌ ಶೆಟ್ಟರ್ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಮಲ್ಲಮ್ಮ ತಿಳಿಸಿದ್ದಾರೆ. ಅವರಿಂದ ಕಿರಿಕಿರಿ ಇರುವುದರಿಂದ ಭದ್ರತೆ ನೀಡುವಂತೆ ಮನವಿ‌ ಮಾಡಿದ್ದಾರೆ ಎಂದಿದ್ದಾರೆ.
 
ಮಲ್ಲಮ್ಮ ಅವರು ಕಾಂಗ್ರೆಸ್ ಸೇರುವುದಾಗಿಯೂ ಹೇಳಿದ್ದಾರೆ. ಆದರೆ, ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಎಂದು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ