ಒಳಬಟ್ಟೆ ಹರಿದಿದೆ! ಬಟ್ಟೆ ಅಂಗಡಿ ತೆರೆಸಿ! ಸಿಎಂಗೆ ಮನವಿ ಮಾಡಿದ ವ್ಯಕ್ತಿ

ಬುಧವಾರ, 2 ಜೂನ್ 2021 (09:19 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬಟ್ಟೆ ಅಂಗಡಿಗಳು ಬಾಗಿಲು ಮುಚ್ಚಿ ಕೂತಿವೆ. ಆದರೆ ಇದರಿಂದ ಕೆಲವರ ವೈಯಕ್ತಿಕ ಸಂಕಟ ಹೇಳಿಕೊಳ್ಳಲಾಗದಂತದ್ದು.


ಆದರೆ ಇಲ್ಲೊಬ್ಬರು ಸಿಎಂಗೇ ಪತ್ರ ಬರೆದು ತಮ್ಮ ‘ಸಂಕಟ’ ತೋಡಿಕೊಂಡಿದ್ದಾರೆ. ನನ್ನಲ್ಲಿದ್ದ ಎರಡು ಜೊತೆ ಒಳಬಟ್ಟೆಯೂ ಹರದಿದೆ. ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ನರಸಿಂಹ ಮೂರ್ತಿ ಎಂಬವರು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ!

ಒಳಬಟ್ಟೆ, ಬನಿಯನ್ ಹರಿದಿದೆ. ಇದರಿಂದ ಎಷ್ಟು ತೊಂದರೆಯಾಗುತ್ತಿದೆ ಗೊತ್ತಾ? ಪಾಪ, ಹೆಣ್ಣು ಮಕ್ಕಳ ಗತಿ ಏನಾಗಬೇಕು? ತಿಂಗಳಿಗೆ ಒಮ್ಮೆಯಾದರೂ ಬಟ್ಟೆ ಅಂಗಡಿ ತೆರೆಯಲು ಅವಕಾಶ ಕೊಡಿ ಎಂದು ಮೈಸೂರಿನವರಾದ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ