ಅಪ್ಪಿಕೊಳ್ಳಲು ಒಪ್ಪದಿದ್ದಕ್ಕೆ ಗೆಳೆಯನಿಗೇ ಚೂರಿಯಿಂದ ಇರಿದ ಭೂಪ!

ಬುಧವಾರ, 3 ಜುಲೈ 2019 (11:14 IST)
ಬೆಂಗಳೂರು: ಕೆಟ್ಟ ಬಾಯಿ ವಾಸನೆ ನೆಪವೊಡ್ಡಿ ಅಪ್ಪಿಕೊಳ್ಳಲು ನಿರಾಕರಿಸಿದ ಗೆಳೆಯನನ್ನು ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಘಟನೆ ನಗರದ ಕಲಾಸಿಪಾಳ್ಯ ಬಳಿ ನಡೆದಿದೆ.


ನಬಿ ಎಂಬ ವ್ಯಕ್ತಿ ಈ ಕೃತ್ಯವೆಸಗಿದವ. ಈತ ಸ್ನೇಹಿತ ಶೊಯೇಬ್ ನನ್ನು ಅಪ್ಪಿಕೊಳ್ಳಲು ಮುಂದಾದಾಗ ನಿನ್ನ ಬಾಯಿ ವಾಸನೆ ಕೆಟ್ಟದಾಗಿದೆ ಎಂದು ದೂರ ತಳ್ಳಿದ ಎನ್ನಲಾಗಿದೆ.

ಇದರಿಂದ ಅವಮಾನಿತನಾದ ನಬಿ ವಾಗ್ವಾದಕ್ಕಿಳಿದಿದ್ದಾನೆ. ಕೊನೆಗೆ ಸಿಟ್ಟಿನಲ್ಲಿ ಚೂರಿಯಿಂದ ಶೊಯೇಬ್ ನ ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ಶೊಯೇಬ್ ಸಹಾಯಕ್ಕೆ ಬಂದ ಸಹೋದರನಿಗೂ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಈಗ ಪೊಲೀಸರು ನಬಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ