ಪ್ರತಿಮಾ ಕೊಲೆ ಮಾದರಿಯಲ್ಲೇ ಮಂಡ್ಯದಲ್ಲಿ ಮತ್ತೊಂದು ಕೊಲೆ

ಬುಧವಾರ, 8 ನವೆಂಬರ್ 2023 (10:09 IST)
ಮಂಡ್ಯ: ಗಣಿ-ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಂತೆಯೇ ಮಂಡ್ಯದಲ್ಲಿ ಮೇಸ್ತ್ರಿಯೊಬ್ಬನನ್ನು ಸಹ ಕೆಲಸಗಾರ ಕೊಲೆ ಮಾಡಿದ್ದಾನೆ.

ಹಣಕಾಸಿನ ವಿಚಾರದಲ್ಲಿ ಮೇಸ್ತ್ರಿ ಮತ್ತು ಸಹ ಕೆಲಸಗಾರನ ನಡುವೆ ವೈಮನಸ್ಯವಿತ್ತು. ಇದೇ ಕಾರಣಕ್ಕೆ ಇಬ್ಬರ ಗಲಾಟೆಯೂ ನಡೆದಿತ್ತು. ಬಳಿಕ ಉಪಾಯವಾಗಿ ಮೇಸ್ತ್ರಿಯನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದ ಆರೋಪಿ ರವಿ ಕೊಲೆ ಮಾಡಿದ್ದಾನೆ.

ಮಂಡ್ಯ ರಸ್ತೆಯ ಪಕ್ಕದ ಜಮೀನೊಂದರಲ್ಲಿ ಭೀಕರವಾಗಿ ಕತ್ತು ಸೀಳಿ ಕೊಲೆಯಾಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ