ಝಣ ಝಣ ಕಾಂಚಾಣ; ದಾಖಲೆ ಇಲ್ಲದ ಲಕ್ಷಾಂತರ ರೂ. ಪತ್ತೆ

ಬುಧವಾರ, 13 ಮಾರ್ಚ್ 2019 (15:04 IST)
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ನಡುವೆಯೇ ಲಕ್ಷಾಂತರ ರೂ. ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹಾಸನದ ಅರಸೀಕೆರೆ-ತಿಪಟೂರು ಚೆಕ್ ಪೋಸ್ಟ್ ನಲ್ಲಿ ಘಟನೆ ನಡೆದಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಲೋಕಸಭೆ ಚುನಾವಣೆ ವಿಚಕ್ಷಣ ದಳ ತಪಾಸಣೆ ವೇಳೆ ಸಿಕ್ಕ ಹಣ ಇದಾಗಿದೆ. ಸ್ಥಳಕ್ಕೆ ಡಿಸಿ ಅಕ್ರಂಪಾಷಾ, ಎಸ್ಪಿ ಡಾ.ಪ್ರಕಾಶ್ ಗೌಡ ಭೇಟಿ ನೀಡಿದರು. ಕಾರಿನಲ್ಲಿ ಹಣ ಸಾಗಿಸುತ್ತಿದ್ದವರ ತೀವ್ರ ವಿಚಾರಣೆ  ನಡೆಯುತ್ತಿದೆ.

ತನಿಖೆ‌ ಮುಂದುವರಿಸಿರುವ ಅಧಿಕಾರಿಗಳು ಹಣಕ್ಕೆ ಸಂಬಂಧಿಸಿದ ಪೂರಕ  ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ.
ಜಿಪಂ ಸಿ.ಇ.ಓ. ನೇತೃತ್ವದ ನಗದು ಬಿಡುಗಡೆ ಸಮಿತಿಗೆ ಪ್ರಕರಣ  ವರ್ಗಾವಣೆ ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ