ಜನಾರ್ಧನ ಪೂಜಾರಿಗೆ ಟಾಂಗ್ ನೀಡಿದ ಸಚಿವ

ಶುಕ್ರವಾರ, 25 ಜನವರಿ 2019 (14:48 IST)
ಜನಾರ್ಧನ ಪೂಜಾರಿಯವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗೆ ಸಚಿವರೊಬ್ಬರು ಟಾಂಗ್ ನೀಡಿದ್ದಾರೆ.

ಹಾವೇರಿಯಲ್ಲಿ ಸಚಿವ ಜಮೀರ್ ಅಹ್ಮದ್  ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ತಾಕತ್ತು ಏನೆಂಬುದು ಪಕ್ಷಕ್ಕೆ ತಿಳಿದಿದೆ. ಕಾಂಗ್ರೆಸ್ ಪಕ್ಷದ ಕುರಿತಾಗಿ ಕಾರ್ಯಕರ್ತರಿಗೆ ತಿಳಿದಿದೆ. ಜನಾರ್ಧನ ಪೂಜಾರಿ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರಾಗಿದ್ದವರು. ಅವರು ಅಧ್ಯಕ್ಷರಾಗಿದ್ದಾಗ ಪಕ್ಷ ಹೇಗಿತ್ತು? ಈಗ ಹೇಗಿದೆ ಎಂಬುದನ್ನು ಜನ ಅರಿತಿದ್ದಾರೆ.  

ಆದರೆ ಸಿದ್ದರಾಮಯ್ಯನವರ ಶಕ್ತಿ ಜನಾರ್ಧನ ಪೂಜಾರಿಗೆ ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಅವರ ಸಾಮರ್ಥ್ಯ ಗೊತ್ತಿದೆ ಅಂತಾ ಜಮೀರ್ ಅಹ್ಮದ್ ಪೂಜಾರಿ ವಿರುದ್ಧ ಖಾರವಾಗೇ ಟಾಂಗ್ ನೀಡಿದ್ದಾರೆ. ಹಾವೇರಿಯ ಮುನ್ಸಿಪಲ್ ಮೈದಾನದಲ್ಲಿ ಈ ಕುರಿತು ಜಮೀರ್ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ