ಮತ್ತೆ ನಾಡಧ್ವಜ ವಿವಾದ ಕೆಣಕಿದ ಸಚಿವ ಯುಟಿ ಖಾದರ್

ಶನಿವಾರ, 22 ಜುಲೈ 2017 (11:22 IST)
ಬೆಂಗಳೂರು: ರಾಜ್ಯಕ್ಕೆ ಯಾಕೆ ಪ್ರತ್ಯೇಕ ನಾಡಧ್ವಜ ಇರಬಾರದು? ನಾಡಧ್ವಜ ತಂದರೆ ತಪ್ಪೇನು? ಹೀಗಂತ ಸಚಿವ ಯುಟಿ ಖಾದರ್ ಪ್ರಶ್ನಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ನಾಡಧ್ವಜ ವಿವಾದ ಕೆಣಕಿದ್ದಾರೆ.


ನಾಡಧ್ವಜ ತರುವುದರಿಂದ ಏನೂ ತಪ್ಪಾಗಲ್ಲ. ಇದನ್ನು ನಾಡಧ್ವಜ ವಿರೋಧಿಗಳು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಯಾವತ್ತೂ ಅಖಂಡ ದೇಶದ ಪರ. ದೇಶದ ಒಕ್ಕೂಟ ವ್ಯವಸ್ಥೆಗೆ ಧ್ವಜ ಅಡ್ಡಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ನಾಡಧ್ವಜ ವಿಚಾರ ಕೆಣಕಬೇಡಿ ಎಂದು ಹೈಕಮಾಂಡ್ ನಿಂದ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಮೂಲಕ ರಾಜ್ಯ ಕಾಂಗ್ರೆಸ್ ಗೆ ಸೂಚನೆ ರವಾನೆಯಾಗಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ..  ಪರಪ್ಪನ ಅಗ್ರಹಾರದಲ್ಲಿ ವಿಐಪಿ ಆತಿಥ್ಯಕ್ಕೆ ಬ್ರೇಕ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ