ಮರ್ಮಾಂಗ, ನಾಲಿಗೆಗೆ ಕತ್ತರಿ ಹಾಕಿದ ದುಷ್ಕರ್ಮಿಗಳು..!

ಶನಿವಾರ, 18 ಮಾರ್ಚ್ 2017 (14:20 IST)
ವ್ಯಕ್ತಿಯ ಮರ್ಮಾಂಗಕ್ಕೆ ದುಷ್ಕರ್ಮಿಗಳು ಕತ್ತರಿ ಹಾಕಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್`ನ ಇಮ್ಮಡಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮೊದಲಿಗೆ ನಾಲಿಗೆಯನ್ನ ಕತ್ತರಿಸಿದ್ದಾರೆ ಎಂದು ಹೇಳಲಾಗಿತ್ತು. ಇದೀಗ, ತನಿಖೆ ವೇಳೆ ಮರ್ಮಾಂಗಕ್ಕೂ ಗಾಯ ಮಾಡಿದ್ದಾರೆ ಎನ್ನುವ ಅಂಶ ಬಹಿರಂಗವಾಗಿದೆ.

ಹಲ್ಲೆಗೀಡಾದ ವ್ಯಕ್ತಿಯನ್ನ 20 ವರ್ಷ ಒಡಿಶಾದ ಬಿಜು ನಾಯಕ್ ಎಂದು ಗುರ್ತಿಸಲಾಗಿದೆ. ರಾತ್ರಿ ಮೂತ್ರ ವಿಸರ್ಜನೆಗೆ ಹೊರಬಂದ ಬಿಜುನಾಯಕ್  ಅವರ ಮೇಲೆ ನಾಲ್ವರು ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ದುಷ್ಕೃತ್ಯ ಎಸಗಿದ್ದಾರೆ.  

ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಬಿಜುನಾಯಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ