75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಶಾಸಕರ ಕಾಲ್ನಡಿಗೆ ಜಾಥಾ..!

ಭಾನುವಾರ, 7 ಆಗಸ್ಟ್ 2022 (14:04 IST)
75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರು ಅಮೃತಘಳಿಗೆಗಾಗಿ  ಕಾಲ್ನಡಿಗೆ  ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಇನ್ನು ಈ ವಾಕ್ ಥಾನ್ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ರು.
 
ಚಿಕ್ಕಪೇಟೆ ಶಾಸಕರ ಕಛೇರಿಯಿಂದ ಅಶೋಕ್ ಪಿಲ್ಲರ್ ವರೆಗೂ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಚಿಕ್ಕಪೇಟೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ವಾಕ್ ಥಾನ್ ನಲ್ಲಿ ಉಪಸ್ಥಿತಿರಾದರು.
 
ಇನ್ನು ಇದೇ ವೇಳೆ ಮಾತನಾಡಿದ ಶಾಸಕ ಉದಯ್ ಗರುಡಾಚಾರ್ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರ ಕರೆಯಂತೆ ಇವತ್ತು ಜಾಥಾ ಹಮ್ಮಿಕೊಂಡಿದ್ದೇವೆ. 75 ನೇ ಯ ಅಮೃತ್  ಮಹೋತ್ಸವ ಆಚರಿಸುತ್ತಿದ್ದೇವೆ.ಹರ್ ಘರ್ ತಿರಂಗಾ ಎನ್ನುವಂತೆ ಇವತ್ತು ನಮ್ಮ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ವಾಕಾಥಾನ್ ನಲ್ಲಿ ಭಾಗವಹಿಸಿದ್ದಾರೆ.ಜೈ ಜೈ ಮಾತಾ ಭಾರತ ಮಾತಾ ಎನ್ನುವ ಘೋಷಣೆ ಕೂಗುತ್ತ ಸಾಗುತ್ತಿದೇವೆ ಎಂದಿದ್ದಾರೆ.ಅಷ್ಟೇ ಅಲ್ಲದೇ ಇದರ ಜೊತೆಗೆ ಭಾರತ ಮಾತೆಗೆ ಬಿಎಸ್ಎಫ್ ಯೋಧರಿಂದ ಪುಷ್ಪಾರ್ಚನೆ ಮಾಡಿಸಲಾಯಿತು.ಮಿಲಿಟರಿ ಶಾಲೆಯ ಮಕ್ಕಳು ಹಾಗೂ ಕಾರ್ಯಕರ್ತರು ಕೂಡ ಉಪಸ್ಥಿತರಿದ್ದರು.ಇನ್ನು ಭಾರತ ಸಮೃದ್ದ ,ಸದೃಢ ಯುವ ಜನಾಂಗ ಕೊಡುಗೆ ನೀಡಬೇಕೆಂದು ಶಾಸಕ ಉದಾಯಗರುಡಾಚಾರ್ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ